ಕವಿತೆ ಕಾರ್ನರ್

ಶರಣಾಗು ಚಕ್ರವರ್ತಿಯೇ!! ನಿನ್ನ ಕಿರೀಟಗಳಲಿ ಅಂಟಿಸಿದವಜ್ರಗಳು ಇಲ್ಲವಾಗುತ್ತವೆನೀನು ಕೂತ ಸಿಂಹಾಸನದಕಾಲುಗಳಿಗೆ ಗೆದ್ದಲಿಡಿಯುತ್ತವೆನಿನ್ನರಮನೆಯಬುನಾದಿಕುಸಿದು ಬೀಳುತ್ತದೆ. ನಿನ್ನ ಅಂತ:ಪುರದ ರಾಣಿಯರುಅವರ ದಾಸಿಯರುಕಾವಲಿನ ಸೇವಕರ ಜೊತೆಓಡಿ ಹೋಗುತ್ತಾರೆ ನಿನ್ನ ವಂದಿ ಮಾಗಧರುಶತ್ರು ಸೈನ್ಯದ ಜೊತೆ ಸೇರಿಕತ್ತಿಮಸೆಯುತ್ತಾರೆ. ನೀನಾಳಿದ ನರಸತ್ತ ನಾಮರ್ದ ಪ್ರಜೆಗಳೆಲ್ಲವೀರ್ಯವತ್ತಾಗಿಹೊಸ ಸೂರ್ಯನಹುಟ್ಟಿಸುತ್ತಾರೆ ಹೊಸ ಹೂತೋಟಗಳ ಬೆಳೆಸುತ್ತಾರೆಇರುಳಬಣ್ಣವನೆಲ್ಲ ಅಳಿಸಿಹಗಲಿನ ಬೆಳಕಿನ ಬಣ್ಣಬಳಿಯುತ್ತಾರೆ ನಿನ್ನ ಶಸ್ತ್ರಾಗಾರದ ಖಡ್ಗಗಳನ್ನೆಲ್ಲಕಡಲಿಗೆಸೆದುಆ ಕೊಠಡಿಯಲ್ಲಿ ವೀಣೆ ತಂಬೂರಿಗಳನ್ನಿಡುತ್ತಾರೆ ನಿನ್ನೆಲ್ಲ ವಿಜಯದಸಂಕೇತವಾಗಿಕಟ್ಟಿಸಿದಸ್ಮಾರಕ ಸ್ಥಾವರಗಳನ್ನೆಲ್ಲಒಡೆದು ಹಾಕಿಅಲ್ಲಿಮಕ್ಕಳಿಗೆ ಹಾಲು ನೀಡುವಕೆಂದಸುಗಳ ಕಟ್ಟುತ್ತಾರೆ! ಸುಮ್ಮನೆಶರಣಾಗಿಬಿಡುಬಡಿದಾಡಿ ಹೈರಾಣಾಗಬೇಡ! ******** ಕು.ಸ.ಮದುಸೂದನರಂಗೇನಹಳ್ಳಿ